ದೂರದೊಂದು ತೀರದಿಂದ

ಎಲ್ಲಿಂದಲೋ ತೇಲಿ ಮೆಲ್ಲನೆ
ಹರಿದು ಬಂದ ರಾಗ, ಹೂವಿನ
ಗಿಡಗಳ ಮೇಲೆ ಹಾರುವ ಚಿಟ್ಟೆ!
ಎದೆ ತುಂಬ ಪರಿವೆ ಇಲ್ಲದ ನೆನಪು,
ಅಂಗಳದಲಿ ಕುಪ್ಪಳಿಸುವ ನೀಲಿಹಕ್ಕಿ,
ಸಾವರ ಸಂತಸದ ಮೋಡಗಳ
ಸಂಚಲನ ಭಾನು!
ಒಮ್ಮೆ ಹೀಗೆ ಸಂತೃಪ್ತದಲಿ
ಹೊಳೆವ ಮನದ ಮಿಂಚು
ಮಾಯವಾಗಿವೆ ಜಗದ
ತಲ್ಲಣಗಳ ಮರೆತ ಮಾತು
ನೀ ಬರುವ ದಾರಿ ಸ್ವಚ್ಛವಾಗಿ ತಿಳಿಯಲಾಗಿದೆ.

ಎಲ್ಲಿಂದಲೋ ಸೂಸಿ ಬಂದ ಸುಹಾಸನೆ
ಕಾಮನ ಬಿಲ್ಲಿನ ರಂಗು
ಚಿಗುರು ಚಿಗುರಲಿ ಹಸಿರು ಕಂಪನ
ರಾಗ ತಾಳಕೆ ಭಾವಗೀತೆ ಹಾಡಿದ ಕೋಗಿಲೆ
ಘಮ್ಮೆಂದು ಸೂಸಿ ತಳಿರು ಹಗುರ
ಗಂಧಗಾಳಿ ಒಡಲ ತುಂಬ ಸೂಸಿ
ಬೆಳದಿಂಗಳ ಸಾಧಕ ಕವಿಗಳು
ಕೆರೆಯ ದಂಡೆಯ ಅಲೆಯಗುಂಟ
ಗಾಳ ಹಾಕಿದ ಹುಡುಗ ತುಂಟ
ಎಲ್ಲ ಪ್ರಶ್ನೆಗಳಿಗೆ ಉತ್ತರ ಕೇಳುವ
ತುಂಟ ಮಗಳು ಕವಿತಾ
ನೀ ನಡೆದು ಬರುವ ದಾರಿಯಲಿ ಯುಗಾದಿ ಸಂಭ್ರಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೬೭
Next post ಶ್ರೀ ಗುರುವಿಗೆ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys